
ಮುದ್ದೇಬಿಹಾಳ: ಪಟ್ಟಣದ ಪಿಲೇಕೆಮ್ಮ ನಗರದ ನಿವಾಸಿ ಶರಣಪ್ಪ ಬಸಪ್ಪ ಹಡಪದ (35) ಸೋಮವಾರ ಇಂದಿರಾನಗರ ಬಡಾವಣೆಯ ಹೊರವಲಯದಲ್ಲಿ ಹಾಯ್ದು ಹೋಗಿರುವ ನೀರಾವರಿ ಕಾಲುವೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಗ್ನಿಶಾಮಕ ತಂಡ, ಸ್ಥಳೀಯರ ಸಹಾಯದಿಂದ ಶವ ಹೊರತೆಗೆದು ಕಾನೂನು ಕ್ರಮ ಜರುಗಿಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಜಲು ಹೋದಾಗ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.






